Monday, December 9, 2013

ಘಾಟು ಪದ್ಯ:


ಇದು ನೆನ್ನೆ ಶುಭ ಚಂಪಾ ಷಷ್ಠಿಯ ದಿನ ನಾನು ಕುಕ್ಕೆ ಸುಬ್ರಮಣ್ಯನ ದರ್ಶನ ಮುಗಿಸಿ ಬಸ್ಸಿನಲ್ಲಿ ಚಿತ್ರದುರ್ಗಕ್ಕೆ ಪ್ರಯಾಣಿಸುವಾಗ, ಬಾಗಿಲಿನ ಬಳಿ  ಇರುವ ಸ್ಟೈರ್ ಕೇಸಿನ(ಮೆಟ್ಟಿಲು) ಮೇಲೆ ಬಂದು ನಿಂತಾಗ ನನ್ನ ತಲೆಗೆ ಹೊಳೆದ ಪದ್ಯ.

ಬದುಕು ಘಾಟ್ ಸೆಕ್ಷನ್ನು ಡ್ರೈವರ್ ಅದರ ಸಾಹೇಬ।।
ಪ್ಯಾಸೆಂಜರ್ ನೀ ಅವನು ಹೇಳ್ದಂತೆ ಓಲಾಡು।।
ದುರ್ಗಕೊ ಹಾಸ್ಪಿಟಲ್ಗೊ ಹೋಗೆಂದ ಕಡೆಗೋಡು।।
ಕೇಸ್(ಸ್ಟೈರ್ ಕೇಸ್) ಕುಸಿಯೆ ನೆಲವಿಹುದು ಸೂರ್ಯತಿಮ್ಮ ।।

ವ್ಯಾಖ್ಯೆ:
ಬದುಕು ಘಾಟ್ ಸೆಕ್ಷನ್ನಿನ್ನಂತೆ, ಒಮ್ಮೆ ಮೇಲೆರುತ್ತೇವೆ ಮತ್ತೊಮ್ಮೆ ಕೆಳಗೆ. ಮೇಲೇರಿದಾಗ ಸಂತೋಷಪಡುತ್ತೇವೆ ಕೆಳಗೆ ಇಳಿದಾಗ ದುಖಿ:ಸುತ್ತೇವೆ. ಆದರೆ ಬಸ್ಸನ್ನು ಡ್ರೈವ್ ಮಾಡುತ್ತಿರುವ ಡ್ರೈವರನಿಗೆ ಬಸ್ ಹೇಗೆ ಚಲಿಸುತ್ತದೆ ಎನ್ನುವುದು ಚೆನ್ನಾಗಿ ಗೊತ್ತು ಆದರೂ ಅವನು ನಿರ್ಭಾವುಖನಾಗಿ ತನ್ನ ಕೆಲಸ ತಾನು ಮಾಡುತ್ತಿರುತ್ತಾನೆ. ಅವನು ನಮ್ಮನ್ನು ಚಿತ್ರದುರ್ಗಕ್ಕೆ ಸುರಕ್ಷೆಯಾಗಿ ಕರೆದೊಯ್ಯಬಲ್ಲನು ಅಥವಾ ಆಸ್ಪತ್ರೆಗೂ ಸೇರಿಸಬಲ್ಲನು. ಆದರೂ ನಮಗೆ ಇರಬೇಕಾದ ನಂಬಿಕೆಯೊಂದೇ, ಸ್ಟೈರ್ ಕೇಸ್ ಕುಸಿದರು ನೆಲದ ಮೇಲೆ ಬಿದ್ದು ಬದುಕಬಹುದು.

-ಸೂಪ್ರ